ಪ್ರೀತಿ ತಿಳಿಯದು!
- Abhishek thirthahalli
- Apr 18, 2024
- 2 min read
ತುಂಬಾ ದಿನ ಆಗಿತ್ತು ಬಾಯ್ಗ್ ಬಂದಂಗ್ ಗೀಚ್ದೆ.... ಸೋ ಇದೊಂದು ತಾತ್ಕಾಲಿಕ ಬರವಣಿಗೆ.... ನಾನು ಅನ್ನೋದ್ಕಿಂತ ನನ್ನೊಳಗೆ ಅತ್ವಾ ನನ್ ಸುತ್ತಾ ಮುತ್ತ ಆಗ್ತಿರೋ ಸಮಸ್ಯೆಗಳಿಗೆ ವಿಷಯಗಳಿಗೆ ನಾನೂ ಜವಬ್ದಾರನಂತೆ ಇರುವ ನನ್ನ ಬಗ್ಗೆ ಒಂದಿಷ್ಟು ಮಾತುಕತೆ..... ಇಲ್ಲಿ ನಾನು ಹೇಳ್ತಿರೋ ಕೆಲವೊಂದು ವಿಚಾರಗಳು ತುಂಬಾ ಸೊಗಸಾಗಿ ತಪ್ಪು ಆಗಿರುವಂತದ್ದು...
ಪ್ರೀತಿ ತಪ್ಪು ಅನ್ನುವವರೆಲ್ಲ ಕೈ ಮೇಲೆತ್ತಿ... ಓಕೆ... ಅಲ್ಲಿ ಮದ್ಯದಲ್ಲಿ ಕೂತಿರೋ ನೀವು ಯಾಕೆ ಈ ಪ್ರೀತೀನ ತಪ್ಪು ಅಂತಿದೀರ ಕೇಳ್ಬೋದಾ? ( ಕೆಲವೊಂದು ವಿಚಾರಗಳನ್ನ ಅವರ ಮನಸ್ಸಿಗೆ ಬಂದಂತೆ ತಾವು ಅರಿತಂತೆ ಹೇಳ್ತಾರೆ.......) ( ನನ್ನ ಮನಸ್ಸಿನೊಡನೆಯೇ ಮಾತನಾಡಿಕೊಂಡೆ ) ಹಾಗೆ..... ಓಕೆ....
ಇರ್ಲಿ ಅವರು ಹೇಳ್ತಿರೋ ವಿಚಾರ ತಪ್ಪು ಅಂತಲ್ಲ ಸರಿಯಾಗಿಯೇ ಇದೆ..... ಪ್ರೀತಿ ಮಾಡೋದು ತಪ್ಪಲ್ಲ... ಆದರೆ ಪ್ರೀತಿಯಲ್ಲಿ ತಪ್ಪನ್ನ ಮಾಡೋದು ತಪ್ಪು...!!?? Oh is it true?? ಆದ್ರೆ ಈ ತಪ್ಪು ಯಾವ್ ತರ! ನಿಜಾನಾ ಸುಳ್ಳಾ? ಅಯ್ಯೋ ಮೂದೇವಿ ಅಂತೆ ಕಂತೆ ಸಂತೆ ನಡ್ವೆ ಚಿಂತೆ ಇಲ್ದ ಪಿಶಾಚಿ ನೀನು ಪ್ರೀತಿ ಬಗ್ಗೆ ಅಷ್ಟೋಂದ್ ಕಾಳಜೀನಾ!! ಇಲ್ಲೀ ತಂಕ ಓದ್ಕಂಡ್ ಬಂದಿರದ್ಕೆ ತುಂಬಾ ತ್ಯಾಂಕ್ಸ್ ಕಣ!
ಹ್ಮ್ ! ನಾನ್ ಈ ಬರವಣಿಗೆನಾ ಯಾರಿಗೂ ವೈಯಕ್ತಿಕವಾಗಿ ಹೇಳಲು ಹೊರಟಿಲ್ಲ... ಆದರೆ ಒಂದು ನಿಜವಾದ ಭಾವನೆ ಅತ್ವಾ ಪ್ರೀತಿ ಅನುಕಂಪದ ನಡುವೆ ಆಗುತ್ತಿರುವ ತಪ್ಪು ಒಪ್ಪುಗಳ ಬಗೆಗಿನ ನನ್ನೊಳಗಿನ ಸಂದೇಹ ಇವು.. ಒಬ್ಬಾಕೆ ನಿಜವಾದ ಪ್ರೀತಿ ಪಡಿಯೋಕೆ ಪ್ರಯತ್ನಿಸ್ತಾಳೆ.... ಆದರೂ ಆಕೆಗೆ ಆ ಪ್ರೀತಿಯು ಪೂರ್ಣವಾಗಿರೋದಿಲ್ಲ.... ಇನ್ನಬ್ಬಳ ಪ್ರೀತಿಗೆ ಸಿಕ್ಕಿದ್ದು ಅಪೂರ್ಣ ಪ್ರೀತಿ.... ಅರ್ಥವಾದರೂ ಈ ಹರೆಯದ ಆಟಕ್ಕೆ ಅವರಿಗೆ ಆ ಪ್ರೀತಿ ಅರ್ಥವಾಗಿಲ್ಲ.... ಇನ್ನೊಬ್ಬಳು ತೀರಾ ಸಾಮಾನ್ಯೆ, ಪ್ರೀತಿಯ ಅನುಭವವಿಲ್ಲ....! ಮತ್ತೊಬ್ಬಳು ಪ್ರೀತಿಯ ಹುಡುಕಾಟದಲ್ಲಿ ತನ್ನ ಜೀವನದ ಸ್ವಾತಂತ್ರ್ಯಕ್ಕೆ ಪರದಾಡುತ್ತಾ ಇರುವಾಕೆ....... ಅಬ್ಬ ಇವರಿಷ್ಟು ಸಾಕು ಇವತ್ತಿಗೆ..... ಎಲ್ಲರದ್ದೂ ಪ್ರೀತೀನೇ! ಆದ್ರೆ ಒಂದೊಂದು ರೀತಿ.... But ನಾನಿಲ್ಲಿ ಗಮನಿಸಿದ್ದು ಏನೆಂದ್ರೆ ಯಾರು ತನ್ನನ್ನ ತಾನು ಎಲ್ಲಾ ವಿಷಯಗಳಲ್ಲೂ ಹಿಡಿತದಲ್ಲಿ ಇಟ್ಕೊಳ್ತಾರೋ ಅವರೇ ಗೆದ್ದೋರು ಅಂತ.... ಕೆಲವೊಮ್ಮೆ ನಾವಿರುವ ವಾತಾವರಣ ನಮ್ಮನ್ನ ಕೆಲವೊಂದು ತಪ್ಪುಗಳನ್ನ ಮಾಡಿಸುವಂತಾಗುತ್ತದೆ.. ಆದರೆ ಆ ತಪ್ಪೇ ಚಟವಾದರೆ ಬದುಕಿನ ಅರ್ಥ ಹಾಳಾಗಬಹುದು ಎಂಬ ಹೆದರಿಕೆ ನನಗೆ.... ಅತ್ಮವು ದೇಗುಲವಿದ್ದಂತಾದರೆ ದೇಹ? ಈದೇಹ ಉತ್ತಮವೋ ಸರ್ವೋತ್ತಮವೋ??? ಯಾರಿಗಾಗಿ ಇದು ಯಾಕಾಗಿ ಇದು ಎನ್ನುವ ಪರಿಜ್ನಾನು ನಮ್ಮದ್ದಾದರೆ ಬದುಕು ಸೊಗಸಾಗಬಹುದು........ !
ಪ್ರೀತಿ ದೇಹ ಕನಸುಗಳು ಕಾಮನೆಗಳು ಜೊತೆಗೆ ಬಯಕೆಗಳು ! ಇವೆಲ್ಲದುರ ನಡುವಿನ ಇಂಗಿತವನ್ನು ತೃಪ್ತಿ ಪಡಿಸುವ ಬದುಕು.... ತಪ್ಪು ಸರಿಗಳ ನಡುವೆ ಕಳೆದು ಹೋದಂತೆ!!! ನಮ್ಮ ತಂದೆ ತಾಯಿಯಿಟ್ಟ ಹೆಸರಿನ ಜೊತೆಗೆ ಕಷ್ಟ ಪಟ್ಟು ಕೀರ್ತಿ ತಂದುಕೊಂಡು ಉಳಿಸಿಕೊಂಡ ನಮ್ಮ ಹೆಸರಿಗೆ ಅಪಕೀರ್ತಿ ಬಾರಸಂತೆ! ನಾಲ್ಕು ಜನ ನಮ್ಮ ಹಿಂದಿಂದ ಆಡಿಕೊಂಡರೂ( ಯಾರ್ ಏನ್ಬೇಕಾದ್ರೂ ಅಡ್ಕೊಳ್ಳಿ - ಹೇಳೋರ್ ಹೇಳ್ತಾರೆ ) ಎಲ್ಲವನ್ನು ತಿರಸ್ಕರಿಸುವ ಮನೋಬಾವದ ಬುದ್ದಿಪ್ರಾಣಿಯನ್ನು ಮನವೊಲಿಸುವ ರಕ್ಷಿಸುವ ಹಾಗೂ ಉದ್ದಾರಗೈಯುವ ಸಾದಾಕರಾರಾದರೂ ಇದ್ದರೆ ದಯವಿಟ್ಟು ಸಂಪರ್ಕಸಿ...
ನಿಮ್ಮ ಅಭಿಷೇಕ್ ತೀರ್ಥಹಳ್ಳಿ.
Comentarios