ನೆನಪುಗಳು ಬೇಕು...ಮರೆತು ಇನ್ನೂ ಮುಂದೆ ಸಾಗಲು..
- Abhishek thirthahalli
- Apr 12, 2020
- 2 min read
ಕಲ್ಪನೆಯ ಕಥೆಯಿದು. ಸರಿ ಮುಂದೆ ಸಾಗಿ.. !
ನೆನ್ನೆ ರಾತ್ರಿ ಹಾಗಿತ್ತು.... ಕಣ್ಣಲ್ಲಿ ನೀರು ಸುರಿಯತೊಡಗಿತ್ತು, ಭಾವನೆಗಳೇ ನನ್ನ ಆಟವಾಡಿಸತೊಡಗಿತ್ತು... ಮಾಡಿದ ಒಂದೇ ತಪ್ಪು..ಅದು ಪ್ರೀತಿ....ಅತಿಯಾದ ಪ್ರೀತಿ ತೋರಿಸಿದ್ದು ಕೊನೆಯಲ್ಲಿ ಆ ಪ್ರೀತಿಯನ್ನು ಉಳಿಸಿಕೊಳ್ಳದೆ ನಾ ಉಳಿದಿದ್ದು.... ವಸ್ತು ಸರಿಯಿಲ್ಲದಿದ್ದರೆ ಜಾಣರು ಅದನ್ನ ಸರಿಮಾಡುತ್ತಾರೆ....ಆದರೆ ಬಲವಂತ ಮಾಡೋರು ಹೆಡ್ಡರೆಂದು ಕರೆಸಿಕೊಳ್ಳುವರು..ನನ್ನಲ್ಲಿ ಬಲವಂತದ ಪ್ರಶ್ನೆಯೇ ಇಲ್ಲ....ಆದರೆ ನಾ ಅದೆಷ್ಟೇ ಪ್ರಯತ್ನ ಪಟ್ಟರೂ ಈ ಪ್ರೀತಿ ನನ್ನಿಂದ ಬಲು ದೂರಕ್ಕೆ ಸಾಗುವ ನಿರ್ಣಯ ತೆಗೆದು ದೂರಸಾಗುವ ಹಠ ತೋರುತ್ತಿದೆ...ಆಡಿದ ಮಾತಿಲ್ಲ ಹೇಳದ ಸಾಂತ್ವಾನವಿಲ್ಲ ನಮ್ಮಿಬ್ಬರ ನಡುವೆ ಇದು ಪ್ರಯೋಜನವೂ ಆಗಲಿಲ್ಲ. ಇದೇನೂ ಮೊದಲ ಬಾರಿಯಲ್ಲ....ಪ್ರತಿ ಸಲ ಆಕೆ ನನ್ನಿಂದ ದೂರಹೋದರು ಅವಳ ಮೇಲಿನ ನನ್ನ ಪ್ರೀತಿ ಎಂದಿಗೂ ಕಮ್ಮಿಯಾಗಿಲ್ಲ...ಆಕೆಯನ್ನ ಹಿಂದಿನ ವೈಭವದಲ್ಲೇ ನಾ ಕಂಡೆ....ಅತಿಯಾದರೆ ಅಮೃತವೂ ವಿಷವೆಂಬಂತೆ ಅತಿಯಾದ ಪ್ರೀತಿ ನಂಬಿಕೆ ನನ್ನ ಬಾಳಿಗೆ ಮುಳುವಾಯಿತು.... ಪ್ರೀತಿ ಹಂಚಿ ನನಗೇ ಪ್ರೀತಿ ದೊರಕಲಿಲ್ಲ....ಸ್ವಾರ್ಥಿ ನಾನಲ್ಲ ನಾ ತೋರಿದ ಪ್ರೀತಿ ನನಗೂ ಪುನಃ ಬೇಕು ಎಂದೇನಲ್ಲ ಆದರೆ ಅವಳು ತೋರುವ ರೀತಿಯಲ್ಲಿ ನಾನೂ ಒಮ್ಮೆ ಅವಳಿಂದ ಪ್ರೀತಿಸಲ್ಪಡಬೇಕೆಂಬ ಕಾತರ..ಎಲ್ಲರೂ ಬಯಸುವುದು ಒಂದೆ, ಒಂದು ತಾವು ಯಾರನ್ನಾದರೂ ಪ್ರೀತಿಸಬೇಕು ಮತ್ತು ಯಾರಿಂದಾದರೂ ತಾವು ಪ್ರೀತಿಸಲ್ಪಡುವುದು...ಅದು ವಸ್ತುವಾಗಿರಬಹುದು, ಯಾವುದೇ ಪ್ರಾಜೆಕ್ಟ್ ಆಗಿರಬಹುದು ಕುಟುಂಬವೂ ಅಥವಾ ಗಂಡು ಹೆಣ್ಣೇ ಆಗಿರಬಹುದು....ಎಲ್ಲರ ಮನದ ಅಭಿಲಾಷೆಯಿದು... ನನ್ನಲ್ಲೂ ಹಾಗೇ ಇತ್ತು... ಅವಳು ನನಗಾಗಿ ಇರುತ್ತಾಳೇನೋ ಎಂಬ ಭರವಸೆ...ಅತಿಯಾಸೆ...ಅದೆಷ್ಟು ಭಾರಿ ವಿಫಲನಾದರೂ ಆಕೆ ನನ್ನ ಬಾಳಲ್ಲಿ ಇನ್ನೊಮ್ಮೆ ಬರುತ್ತಿದ್ದಳು...ಒಮ್ಮೆ ತ್ಯಜಿಸಿದವರನ್ನು ಮತ್ತೊಮ್ಮೆ ಸ್ವೀಕರಿಸುವುದು ಸರಿಯಲ್ಲವಂತೆ...ಆ ಅವಕಾಶ ನಾವು ಕೊಡಬಾರದಂತೆ...ಆದರೆ ನಾನಿತ್ತೆ ಅವಕಾಶವನು....ಕಾರಣ ಆಕೆಯ ಬಗ್ಗೆ ಆಕೆ ತೋರಿದ ಪ್ರೀತಿಯ ಬಗ್ಗೆ ನನಗೆ ಮಾತ್ರ ಗೊತ್ತಲ್ಲ....!ಮುದ್ದು ಸ್ವಭಾವದ ನಲ್ಮೆಯ ಹುಡುಗಿ ನನ್ನಾಕೆ, ತುಂಟು ಮಾತು ವಿಪರೀತ ಭಯ ನಾನಂದ್ರೆ ಪ್ರಂಚಪ್ರಾಣ...ಅಯ್ಯೋ ಇಷ್ಟೆಲ್ಲ ಇದ್ದೂ ಬಿಟ್ಟು ಹೋದಳ ಎಂದು ಕೇಳಬೇಡಿ...ಅವಳು ನನ್ನಿಂದ ದೂರಹೋದಳೇನೋ ಸರಿ ಆದರೆ ಮನಸ್ಸಿನಿಂದಲ್ಲ....ಅಕೆಯ ಬಳಿ ನನ್ನ ನೆನಪಿತ್ತು ನನ್ನ ಬಳಿ ಆಕೆಯ ನೆನಪೇ ಉಸಿರಾಗಿತ್ತು.... ಕಾತಾಣಾಂತರದಿಂದ ನಾವಿಬ್ಬರೂ ದೂರಾಗುವ ಸನ್ನಿವೇಶ ಎದುರಾಯಿತು... ಅನಿವಾರ್ಯತೆ..!!ಇಂದು ಮತ್ತದೇ ಸನ್ನಿವೇಶ ಎದುರಾಗಿದೆ ಮನಸ್ಸು ಮಗುವಿನಂತೆ ಹಠ ಮಾಡಿದರೂ ಅಮಾಯಕ ನಾನು...ವಿಧಿ ಲಿಖಿತವೇನಿದೆಯೋ ಹಾಗೇ ಆಗಲಿ ಎಂದು ಕುಂತರೆ ನನ್ನ ಬಾಳಲ್ಲಿ ನೋವಿನ ಕಥೆಯೆ ಹೆಚ್ಚುತ್ತಿದೆ...ನಾನಾಗಿಯೇ ಅರ್ಥಮಾಡಿಕೊಂಡು ಪ್ರೀತಿಯಿಂದ ದೂರವಿದ್ದು ಬಾಳು ,ಕಲಿಕೆಯ ಬಗ್ಗೆ ಆಸಕ್ತಿ ತೋರಿದೆ ಆದರೂ ಒಂದು ದಿನ ಆ ಪ್ರೀತಿ ಅಚಾನಕ್ ಮಾತನಾಡಲು ದೊರೆತು ಒಂದು ತಿಂಗಳ ಕಾಲ ನೋವ ಮಾರೆಮಾಚಿ ಅದರ ನೋವು ಮನದ ತುಡಿತ ಇಂಗಿತವನ್ನೆಲ್ಲ ಮೊದಲಿಗಿಂತ ಸೊಗಸಾಗಿ ಹಂಚಿಕೊಂಡು ನಾನಿತ್ತ ಮಾತಿಗೆ ಆಕೆಯೂ ಉತ್ತಮ ಪ್ರತಿಕ್ರಿಯೆ ನೀಡುತ್ತ ನನ್ನವಳಾಗಿಯೇ ಬಿಟ್ಟಳು....ಅದೇನೋ ಭಯ ಆಕೆಯಲ್ಲಿ....ವರ್ತಮಾನದ ಬಗ್ಗೆ....ಇದೇ ನಮ್ಮಿಬ್ಬರನು ಇಂದು ದೂರಮಾಡಿರವ ಕಠೋರಿ....ಈ ಜಾತಿ ಎಂಬ ಸಮಸ್ಯೆ ನಮ್ಮಿಬ್ಬರ ಪ್ರೀತಿಗೆ ಅಡ್ಡಿಯಾಗುವುದೆಂದು ತಿಳಿದು ಆಕೆ ನನ್ನಿಂದ ಅದೆಷ್ಟೋ ಬಾರಿ ದೂರಾಗಲು ಪ್ರಯತ್ನಿಸಿ ದೂರಾದಳು....ಮರಳಿ ಬಂದಾಗ ನಾ ಅವಕಾಶವಿತ್ತರೂ ನಾನೇ ನನ್ನ ಅತಿ ದುಃಖದ ಸಮಯದಿ ಆಕೆಯಲ್ಲಿ ಮಾತನಾಡಿ ಆಕೆಯ ಸಾಂತ್ವಾನದ ಮಾತ ಕೇಳಿ ಪ್ರಯೊಜನ ಪಟ್ಟರೂ....ಇಂದು ನನಗೆ ನನ್ನ ಪ್ರೀತಿಯನ್ನು ಉಳಿಸಿಕೊಳ್ಳಲಾಗಲಿಲ್ಲ ಎಂಬ ದೊಡ್ಡ ಕೊರಗು ಹೃದಯದಲ್ಲಿದೆ...ನಾ ತೋರಿಸಬೇಕೆಂದಿದ್ದ ಪ್ರೀತಿ ತೋರಿಸಲಿಲ್ಲ ಆ ಅವಕಾಶವೂ ದೊರಕಲಿಲ್ಲ....ದೊರಕುವುದೂ ಇಲ್ಲ...ಇದು ಸತ್ಯ ಇದು ನಿತ್ಯ ಪ್ರೇಮಿಗಳ ಹಾಡು.....ಇದು ನಮ್ಮಿಬ್ಬರ ಪ್ರೀತಿಯ ಪಾಡು....
Comments